ಕುಂಚಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘವೇಂದ್ರ, ಮುತ್ತುರಾಯಪ್ಪ, ಶ್ರೇಯಸ್, ಅಣ್ಣಯ್ಯ ಉಪವೀರ್ ಕೂಡಿ ನಿರ್ಮಿಸುತ್ತಿರುವ ಸೀನು ನಿರ್ದೇಶನದ ಗಜಪಡೆ ಚಿತ್ರಕ್ಕೆ ಮತ್ತಿಕೆರೆಯ ಜೆ.ಪಿ. ಪಾರ್ಕ್ನಲ್ಲಿ ಸರಿಯಾದ ಸಂಜೆ ಹೊತ್ತಲ್ಲಿ ಸೆರೆಯಾದೆ ನಾನು ನಿನ್ನಲ್ಲಿ ಎಂದು ನಾಯಕ ಹರ್ಷ ಅಭಿನಯದ ಹಾಡನ್ನು ಹರಿಕೃಷ್ಣ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣವಾಯಿತು. ಈ ಚಿತ್ರದ ಛಾಯಾಗ್ರಹಣ ಕುಮಾರ್ ಚಕ್ರವರ್ತಿ, ಸಂಗೀತ- ಅಭಿಲಾಷ್, ಜೋಯಲ್, ಸಂಕಲನ-ಲಿಂಗರಾಜು, ಸಾಹಸ-ಕೌರವ ವೆಂಕಟೇಶ್, ಸಹ ನಿರ್ದೇಶನ-ಭಜರಂಗಿ ಮಂಜು, ಕೋ-ಡೈರೆಕ್ಟರ್- ಗಿರೀಶ್ ಕರುನಾಡು, ನಿರ್ವಹಣೆ-ಶಶಿ. ತಾರಾಗಣದಲ್ಲಿ ಹರ್ಷ, ಅರುಣ್, ಸಿದ್ದೇಶ್, ತನ್ಮಯಿ, ಮೋನಿಷ, ವಿಕ್ಟರಿ ವಾಸು, ಮಾಸ್ಟರ್ ಆನಂದ್, ಜಗ್ಗಿ, ಭರತ್ ಭೂಷಣ್, ಹಿಮೇಶ್, ಕೆಂಪೇಗೌಡ, ಮಹದೇವ್, ಡ್ಯಾನಿ, ವಿನಯ್ ಗೌಡ ಮುಂತಾದವರಿದ್ದಾರೆ.